Posts

ಅಮಾನತು ವಾಪಸ್ ಪಡೆಯದಿದ್ದರೆ ಉಗ್ರ ಹೋರಾಟ

ಅಮಾನತು ವಾಪಾಸ್ ಪಡೆಯದಿದ್ದರೆ ಉಗ್ರ ಹೋರಾಟ! ಕೊರೋನ ವಾರಿಯರ್ಸ್ ರನ್ನ  ವಜಾಗೊಳಿಸಿದ ಬೆನ್ನಲ್ಲೆ ಶುಶ್ರೂಷ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವದಲ್ಲಿ ಸಿಮ್ಸ್ ನಿರ್ದೇಶಕ ಡಾ.ಗುರುಪಾದಪ್ಪನವರನ್ನ ಭೇಟಿ ಮಾಡಿ ಅಮಾನತು ವಾಪಾಸ್ ಪಡೆದುಕೊಳ್ಳುವಂತೆ ಮನವಿ ಸಲ್ಲಿಸಿತು. ಕೊರೋನ ವಾರಿಯರ್ಸ್ ಗಳಾದ ಖಾಯಂ ನೌಕರರಾದ ಚೇತನಾ ಕುಮಾರಿ, ಹೊರಗುತ್ತಿಗೆ ನೌಕರರಾದ ಭುವನೇಶ್ವರಿ, ಪದ್ಮರಾಜ್, ಅರುಣ್ ಕುಮಾರ್ ಲಕ್ಷ್ಮೀ ದೇವಿ, ಅನಿತಾರವರನ್ನ ಅಮಾನತು ಗೊಳಿಸಲಾಗಿತ್ತು. ಇಂದು ಬೆಳಿಗ್ಗೆ ಅಮಾನತುಗೊಳಿಸಲಾಗಿದ್ದು ಸಂಜೆಯಷ್ಟು ಹೊತ್ತಿಗೆ ಶುಶ್ರೂಷ ಸಂಘ ಅಮಾನತುಗೊಳಿಸಿದನ್ನ ವಿರೋಧಿಸಿ ಸಿಮ್ಸ್ ನಿರ್ದೇಶಕರನ್ನ ಮನವಿ ಸಲ್ಲಿಸಿದೆ. ಈ ಕುರಿತು ಮಾತನಾಡಿದ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಮಾತನಾಡಿ, ಈ ಅಮಾನತು ಸರಿಯಲ್ಲ, ವಾಪಾಸ್ ಪಡೆಯಬೇಕು. ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವಿಡಿಯೋ ಕೆಲಸದ ಒತ್ತಡದಿಂದ ಆಗಿರಬಹುದು ಎಂದು ಹೇಳಿದರು. ಕೊರೋನ ವಿರುದ್ಧ ಬಂದ ಮೊದಲ ಪ್ರಕರಣ ಇದು ಆಗಿದ್ದರಿಂದ ಗೌನು, ಮಾಸ್ಕ್ ಮೊದಲಾದ ಎಕ್ಯುಪ್ ಮೆಂಟ್ ಗಳನ್ನ ಹೊತ್ತು ಸತತ 6 ಗಂಟೆಯ ವರೆಗೆ ರೋಗಿಗಳನ್ನ ನೋಡಿಕೊಳ್ಳಬೇಕು ಇದು ಅವರಲ್ಲಿ ಕಿರಿಕಿರಿ ಉಂಟಾಗಿದೆ. ಈ ಹಿನ್ನಲೆಯಲ್ಲಿ ಅಚಾತುರ್ಯವಾಗಿರಬಹುದು. ಇದಕ್ಕೆ ಅಮಾನತು ಶಿಕ್ಷೆ ನೀಡುವುದು ಸರಿಯಲ್ಲವೆಂದರು..  ನಂತರ ಮಾತನಾಡಿದ ಶುಶ್ರೂಷಕಿ ಗಾಯಿತ್ರಿ...

ಗೋವು ಕಳ್ಳರ ಅಟ್ಟಹಾಸ ಶಿವಮೊಗ್ಗದಲ್ಲಿ

Image
ಶಿವಮೊಗ್ಗ ಸಮೀಪ ಮಲವಗೊಪ್ಪದ ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಮುಂಭಾಗ ರಸ್ತೆಯಲ್ಲಿ ಮೇ 12 ರ ಮಂಗಳವಾರ ಮಧ್ಯರಾತ್ರಿ ಎರಡು ಗಂಟೆಗೆ ಗೋವು ಕಳ್ಳರು ಆಕಾಳಿಗೆ ಪ್ರಜ್ಞೆ ತಪ್ಪಿಸುವ ಬ್ರೆಡ್ ನ್ನು ತಿನ್ನಿಸಿ ಕಾರಿನಲ್ಲಿ ಹತ್ತಿಸಿಕೊಳ್ಳಲು ಹೋಗಿ ಪ್ರಯತ್ನ ವಿಫಲವಾಗಿದೆ . ಶಿವಮೊಗ್ಗ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕಿ ಶ್ವೇತಾ ಮಂಜುನಾಥ್

ಪೋಲಿಸರು ಭೇದಿಸಿದ ,ಅಂಬ್ಯೂಲೆನ್ಸ ರಹಸ್ಯ

Image
*ಸೆಕ್ಷನ್ 144Crpc ನಿಯಮ ಉಲ್ಲಂಘನೆ ಮಾಡಿ  ಅಂಬ್ಯೂಲೆನ್ಸ್ ನಲ್ಲಿ  ಬೆಂಗಳೂರಿನಿಂದ ಪ್ರಯಾಣಿಕರನ್ನು ಶಿವಮೊಗ್ಗದ ಕಡೇಕಲ್ ಗ್ರಾಮಕ್ಕೆ ಕರೆತಂದ ವ್ಯಕ್ತಿಯ ವಿರುದ್ಧ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಿಸಲಾಗಿದೆ*             ದೇಶಾದ್ಯಂತ Covid-19 ವೈರಾಣು ಹಬ್ಬುತ್ತಿರುವ ಹಿನ್ನೆಲೆಯಲ್ಲಿ *ಭಾರತ ದೇಶಾದ್ಯಂತ ಲಾಕ್ ಡೌನ್* ಘೋಷಣೆಯಾಗಿದ್ದು ಹಾಗೂ *ಶಿವಮೊಗ್ಗ ಜಿಲ್ಲಾಧಿಕಾರಿಗಳು  ಸೆಕ್ಷನ್ 144 Crpc ಯನ್ನು* ಜಾರಿ ಮಾಡಿ  ಆದೇಶ ಹೊರಡಿಸಿದ್ದು, ಹೊರ ಜಿಲ್ಲೆಯಿಂದ  ಸಾರ್ವಜನಿಕರನ್ನು ಶಿವಮೊಗ್ಗ ಜಿಲ್ಲೆಗೆ ಪ್ರಯಾಣ ಮಾಡಲು ನಿರ್ಭಂದ ವಿಧಿಸಿದ್ದರೂ ಸಹಾ ದಿಃ-25.03.2020 ರಂದು ನಂಬರ್ KA-14 B-1680  ಆಂಬ್ಯೂಲೆನ್ಸ್  ಚಾಲಕನಾದ *ಸಯ್ಯದ್ ಖಾಸಿಂ ಬಿನ್ ಸೈಯದ್ ಅಕ್ಬರ್ ವಾಸ ಅನ್ವರ್ ಕಾಲೋನಿ ಭದ್ರಾವತಿ* ಈತನು ತನ್ನ ಆಂಬ್ಯೂಲೆನ್ಸ್ ವಾಹನದಲ್ಲಿ ಬೆಂಗಳೂರಿನಿಂದ ಶಿವಮೊಗ್ಗದ ಕಡೇಕಲ್ ಗ್ರಾಮದ ವಾಸಿಗಳಾದ  05 ಜನರನ್ನು ಸ್ವ ಗ್ರಾಮಕ್ಕೆ  ಕರೆತಂದು ಬಿಟ್ಟಿರುತ್ತಾನೆ.                ಮಾರಣಾಂತಿಕವಾದ Covid-19 ವೈರಾಣುವು ಇತರರಿಗೂ ಸಹಾ ಹರಡುವ ಸಾದ್ಯತೆಗಳಿದ್ದರೂ ಲಾಕ್ ಡೌನ್ ಹಾಗೂ ಸೆಕ್ಷನ್ 144Crpc ನಿಯಮವನ್ನು  ಉಲ್ಲಂಘನೆ ಮಾಡಿ  ಅಂಬ್ಯೂಲೆನ್ಸ್ ...

ವಾಟ್ಸಪ್ ಮೆಸೇಜ್ಗೆ ಸ್ಪಂದಿಸಿದ ಶಿವಮೊಗ್ಗ ಪೊಲೀಸರು

Image
ವಾಟ್ಸಪ್‌ ಮೆಸೇಜ್‌ಗೆ ಸ್ಪಂದಿಸಿದ‍ ಶಿವಮೊಗ್ಗ ಪೊಲೀಸರು ವೃದ್ಧ ದಂಪತಿಗೆ ನೆರವು ನೀಡಿದ್ದಾರೆ. ಒಂದು ತಿಂಗಳಿಗೆ ಆಗುವಷ್ಟು ದಿನಸಿ ಮತ್ತು ಮಾಸ್ಕ್‌ಗಳನ್ನು ಉಚಿತವಾಗಿ ವಿತರಿಸಿದ್ದಾರೆ. ಶಿವಮೊಗ್ಗ ಮಲವಗೊಪ್ಪದ ಶುಗರ್‌ ಫ್ಯಾಕ್ಟರಿ ಕ್ವಾರ್ಟರ್ಸ್‌ನಲ್ಲಿ ದಂಪತಿ ವಾಸವಾಗಿದ್ದಾರೆ. ಸಂಬಂಧಿಯೊಬ್ಬರು ತೀರಿಕೊಂಡಿರುವ ಹಿನ್ನೆಲೆ, ಕುಟುಂಬದವರು ತಮಿಳುನಾಡಿಗೆ ಹೋಗಿದ್ದು, ಲಾಕ್‌ಡೌನ್‌ ಹಿನ್ನೆಲೆ ಹಿಂತಿರುಗಲು ಆಗಿಲ್ಲ. ಇತ್ತ ವೃದ್ಧ ದಂಪತಿಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಸಾದ್ಯವಾಗಿಲ್ಲ. ವಾಟ್ಸಪ್‌ ಮೆಸೇಜ್‌ಗೆ ಸ್ಪಂದಿಸಿದ ಪೊಲೀಸ್  ..... ವೃದ್ಧ ದಂಪತಿ ಪರಿಸ್ಥಿತಿ ಕುರಿತು ವಾಟ್ಸಪ್‌ನಲ್ಲಿ ಮೆಸೇಜ್‌ ಬಂದಿತ್ತು. ಇದನ್ನು ಗಮನಿಸಿದ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ವೃದ್ಧ ದಂಪತಿಗೆ ನೆರವು ನೀಡುವಂತೆ ಸೂಚಿಸಿದ್ದರು. ಅದರಂತೆ ದಂಪತಿ ಮನೆಗೆ ತೆರಳಿದ ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಎಸ್‌ಐ ಸುರೇಶ್‌ ಮತ್ತು ಸಿಬ್ಬಂದಿ ಒಂದು ತಿಂಗಳಿಗೆ ಆಗುವಷ್ಟು ದಿನಸಿ ನೀಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ                                                      ಶಿವಮೊಗ್ಗ ಜಿಲ್ಲಾ ಸಹ...

ಲಾಕ್ ಡೌನ್ ಸಂದರ್ಭದಲ್ಲಿಯೂ ಉಚಿತ ಪೆಟ್ರೋಲ್ ಗೆ. ನೂಕುನುಗ್ಗಲು ಶಿವಮೊಗ್ಗದಲ್ಲಿ ಎಷ್ಟು ಲೀಟರ್ ಫ್ರೀ? ಯಾರಿಗೆಲ್ಲ ಇತ್ತು ಆಫರ್ ?

Image
ಲಾಕ್‌ಡೌನ್‌ ಹಿನ್ನೆಲೆ ಪೆಟ್ರೋಲ್‌ ಸಿಗುವುದೆ ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ಶಿವಮೊಗ್ಗದ ಪೆಟ್ರೋಲ್‌ ಬಂಕ್‌ ಒಂದರ ಮಾಲೀಕರು ಪ್ರತಿ ಗಾಡಿಗೆ ಒಂದು ಲೀಟರ್‌ ಪೆಟ್ರೋಲ್‌ ಉಚಿತ ಎಂಬ ಆಫರ್‌ ನೀಡಿದ್ದಾರೆ. ಇದು ಒಂದು ದಿನದ ಆಫರ್.‌ ಹಾಗಾಗಿ ಇವತ್ತು ಆ ಪೆಟ್ರೋಲ್‌ ಬಂಕ್‌ ಮುಂದೆ ಜನ ಸಾಗರವೇ ಸೇರಿತ್ತು. ಯಾರಿಗೆಲ್ಲ ಇತ್ತು ಆಫರ್...... ಕರೋನ ವಿರುದ್ಧ ಶಿವಮೊಗ್ಗದಲ್ಲಿ ಹೋರಾಡುತ್ತಿರುವವರಿಗೆ ಬಾಲರಾಜ್‌ ಅರಸ್‌ ರಸ್ತೆಯಲ್ಲಿರುವ ಸಹ್ಯಾದ್ರಿ ಪೆಟ್ರೋಲ್‌ ಬಂಕ್‌ನಲ್ಲಿ ಆಫರ್‌ ನೀಡಲಾಗಿತ್ತು. ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರಿಗೆ ಈ ಆಫರ್‌ ಅನ್ವಯವಾಗಿತ್ತು. ಒಂದು ದಿನದ ಆಫರ್‌ ಈ ದಿನ ಮಧ್ಯಾಹ್ನಕ್ಕೆ ಮುಗಿದಿದೆ.  ಆಫರ್‌ ಕೊಟ್ಟಿದ್ದು ಏಕೆ..... ಕರೋನ ವಿರುದ್ಧ ಹೋರಾಡುವವರಿಗೆ ಹುರಿದುಂಬಿಸುವ ಸಲುವಾಗಿ ಇಂತಹ ಆಫ್‌ ನೀಡಲಾಗಿದೆ. ಈಗ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರಿಗೆ ಉಚಿತ ಪೆಟ್ರೋಲ್‌ ಹಾಕಲಾಗುತ್ತಿದೆ. ಇದೇ ರೀತಿ ಕರೋನ ವಿರುದ್ಧ ಹೋರಾಟ ನಡೆಸುತ್ತಿರುವ ಇನ್ನಷ್ಟು ಜನರಿಗೆ ಈ ಆಫರ್‌ ನೀಡಲಾಗುತ್ತದೆ ಎಂದು ಸಹ್ಯಾದ್ರಿ ಪೆಟ್ರೋಲ್‌ ಬಂಕ್‌ ಮಾಲೀಕ ಸುಹಾಸ್‌ ತಿಳಿಸಿದ್ದಾರೆ. ಸಾಮಾಜಿಕ ಅಂತರಕ್ಕಿಲ್ಲ ಕವಡೆ ಕಿಮ್ಮತ್ತು ಉಚಿತ ಪೆಟ್ರೋಲ್‌ ಆಫರ್‌ ಇದ್ದಿದ್ದರಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ಪ್ರತಿದಿನ ಸಾಮಾಜಿಕ ಅಂತರದ ಪಾಠ ಮಾಡುತ್ತಿದ್ದವರೆ ಅಂತರವಿರಲ್ಲ...

ಯಾರೂ ಮನೆ ಬಿಟ್ಟು ಹೊರ ಬರುತ್ತಿಲ್ಲ ಆದರೂ ನಡೀತಿದೆ ಎಲ್ಲ ಕ್ಲಾಸ್ ಶಿವಮೊಗ್ಗ ಜೆಎನ್ಎನ್ ಕಾಲೇಜು ಡಿಫರೆಂಟ್ ಪ್ರಯೋಗ ಏನದು

Image
ಯಾರೂ ಮನೆ ಬಿಟ್ಟು ಹೊರ ಬರುತ್ತಿಲ್ಲ, ಆದರೂ ನಡೀತಿದೆ ಎಲ್ಲ ಕ್ಲಾಸ್, ಶಿವಮೊಗ್ಗ JNN ಕಾಲೇಜು ಡಿಫರೆಂಟ್ ಪ್ರಯೋಗ, ಹೇಗದು? ಕರೊನಾ ಹಿನ್ನೆಲೆಯಲ್ಲಿ ಹಲವಾರು ಬದಲಾವಣೆಯಾಗಿದೆ. ವರ್ಕ್ ಫ್ರಂ ಹೋಂ ಹಾಗೂ ಆನ್‌ಲೈನ್‌ನ ವ್ಯವಹಾರಗಳಿಗೆ ಇನ್ನಿಲ್ಲದ ಮಹತ್ವ ಬಂದಿರುವುದು ಕರೊನಾದಿಂದ ಎಂದರೆ ಉತ್ಪ್ರೇಕ್ಷೆಯಲ್ಲ. ಈಗ ಇದೇ ಕರೊನಾ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆನ್‌ಲೈನ್ ಶಿಕ್ಷಣಕ್ಕೂ ಕಾರಣವಾಗಿದೆ. ಶಿವಮೊಗ್ಗ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರು ಆನ್‌ಲೈನ್ ಮೂಲಕವೇ ತಮ್ಮ ವಿದ್ಯಾರ್ಥಿಗಳಿಗೆ ತರಗತಿ ನಡೆಸುತ್ತಿದ್ದಾರೆ. ಆ ಮೂಲಕ ಸಮಯ ವ್ಯರ್ಥವಾಗುವುದನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪಾಲಕರ ಆತಂಕ ದೂರ ಮಾಡುವ ಪ್ರಯತ್ನದಲ್ಲಿದ್ದಾರೆ. ಆ್ಯಪ್ ಮೂಲಕವೆ ಕ್ಲಾಸ್ ಆನ್‌ಲೈನ್‌ನಲ್ಲಿ ಲಭ್ಯವಿರುವ ಜೂಮ್ ಆ್ಯಪ್ ಮೂಲಕ ಎಂಬಿಎ, ಎಂಸಿಎ ಹಾಗೂ ಎಂಟೆಕ್ ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಪನ್ಯಾಕಸರು ತಮ್ಮ ಮನೆಗಳಿಂದಲೇ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಕಾಲೇಜಿನ ದೈನಂದಿನ ವೇಳಾಪಟ್ಟಿಯಂತೆ ತರಗತಿಗಳನ್ನು ನಡೆಸಲಾಗುತ್ತಿದೆ.  ಆನ್’ಲೈನ್’ನಲ್ಲೇ ವಿದ್ಯಾರ್ಥಿಗಳ ಹಾಜರಾತಿ ಈ ಆ್ಯಪ್ ಮೂಲಕವೇ ವಿದ್ಯಾರ್ಥಿಗಳ ಹಾಜರಾತಿಗಳನ್ನು ದಾಖಲಿಸಿಕೊಳ್ಳುವುದು, ಅಸೈನ್‌ಮೆಂಟ್‌ಗಳನ್ನು ಸ್ವೀಕರಿಸುವುದು, ಗುಂಪು ಚರ್ಚೆ, ಮುಕ್ತ ಸಂವಾದ ಮುಂತಾದ ಶಿಕ್ಷ...

ತೀರ್ಥಹಳ್ಳಿ ,ಸಾಗರ ತಾಲ್ಲೂಕಿನ ವಿವಿಧೆಡೆಕರೋನಾ ಭಯ ಗಿಂತಲೂ ಮಂಗನ ಕಾಯಿಲೆ ಭಯ ಹೆಚ್ಚಾಗಿದೆ ,ಕಾರಣವೇನು ಗೊತ್ತಾ ?

Image
ಶಿವಮೊಗ್ಗ ಜಿಲ್ಲೆಯಲ್ಲಿ ಕರೋನಗಿಂತಲೂ ಮಂಗನ ಕಾಯಿಲೆ ಭಯ ಹೆಚ್ಚು, ಕಾರಣವೇನು? ಈವರೆಗೆ ಎಷ್ಟು ಪಾಸಿಟಿವ್ ಬಂದಿದೆ? ಜಗತ್ತಿನಾದ್ಯಂತ ಕರೋನ ಆತಂಕವಿದ್ದರೆ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಭೀತಿ ಎದುರಾಗಿದೆ. ತೀರ್ಥಹಳ್ಳಿ, ಸಾಗರ ತಾಲೂಕಿನ ವಿವಿಧೆಡೆ ಮಂಗನ ಕಾಯಿಲೆ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ಕೆಲವು ಕಡೆಗೆ ಜನರು ಕಾಡಿಗೆ ಹೋಗುವುದನ್ನೆ ನಿರ್ಬಂಧಿಸಲಾಗಿದೆ. ತೀರ್ಥಹಳ್ಳಿಯಲ್ಲಿ 111 ಸೋಂಕಿತರು ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನಲ್ಲಿ ಕೆಎಫ್’ಡಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆಯಾಗಿದೆ. ಇನ್ನು ಸಾಗರದಲ್ಲಿ 27 ಮತ್ತು ಹೊಸನಗರ ತಾಲೂಕಿನಲ್ಲಿ ಒಬ್ಬರು ಸೋಂಕು ತಗುಲಿದೆ. ಕೆಎಫ್’ಡಿಗೆ ಐವರು ಸಾವು ಮಂಗನ ಕಾಯಿಲೆಗೆ ಈ ವರ್ಷ ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನಲ್ಲಿ ಐವರು ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಕನ್ನಂಗಿ, ಬೆಟ್ಟಬಸವಾನಿ, ಕೋಣಂದೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇನ್ನು ಸಾಗರದ  ತುಮರಿ ಮತ್ತು ಅರಳಗೋಡು ಪಿಹೆಚ್’ಸಿ ವ್ಯಾಪ್ತಿಯಲ್ಲಿ ತಲಾ ಒಬ್ಬರು ಕೆಎಫ್’ಡಿಗೆ ಅಸುನೀಗಿದ್ದಾರೆ. ದಯವಿಟ್ಟು ಕಾಡಿಗೆ ಹೋಗಬೇಡಿ ಕೆಎಫ್’ಡಿ ಹರಡುವ ಆತಂಕದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನ 31 ಪ್ರದೇಶಗಳನ್ನು ಸೂಕ್ಷ್ಮ ಪ್ರದ...